New ration card application restriction : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಸದ್ಯಕ್ಕಿಲ್ಲ. ಮೊದಲು ಹಳೇ ಅರ್ಜಿ ವಿಲೇವಾರಿ, ಆನಂತರ ಹೊಸ ಅರ್ಜಿಗೆ ಆಹ್ವಾನ ನೀಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಎಚ್ ಕೆ ಮುನಿಯಪ್ಪ (H K Muniyappa) ಅವರು ನೀಡಿದ್ದಾರೆ. ಇದರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾದು ಕೂತಿದ್ದ ಲಕ್ಷಾಂತರ ಕುಟುಂಬಗಳಿಗೆ ನಿರಾಸೆಯಾದಂತಾಗಿದೆ.
ಕಳೆದ ಮೂರು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು (New Ration Card Application) ತಡೆ ಹಿಡಿಯಲಾಗಿದೆ. ಕಳೆದ ಏಪ್ರಿಲ್ 1ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿತ್ತು. ಆದರೆ, ಅಷ್ಟರೊಳಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ್ದರಿಂದ ಅರ್ಜಿ ಸಲ್ಲಿಕೆ ಅವಧಿ ಮುಂದೂಡಲಾಯಿತು.
ಇನ್ನೇನು ಲೋಕಸಭಾ ಚುನಾವಣೆ ಮುಗಿದಿ ಚುನಾವಣಾ ನೀತಿ ಸಂಹಿತೆಯೂ ಕೊನೆಗೊಂಡಿದ್ದು; ಇದೇ ಜೂನ್ 5ರ ನಂತರ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸರಕಾರ ಇದೀಗ ರೇಷನ್ ಕಾರ್ಡ್ ಪಡೆಯಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮಾತ್ರವಲ್ಲ, ಸದ್ಯಕ್ಕೆ ಹೊಸ ಅರ್ಜಿ ಆಹ್ವಾನಕ್ಕೂ ತಡೆ ನೀಡಿದೆ.
ಇದನ್ನೂ ಓದಿ: ಇನ್ಮುಂದೆ ಈ ರೈತರ ಭೂಮಿ ಮಾರುವಂತಿಲ್ಲ, ಯಾರೂ ಖರೀದಿಸುವಂತೆಯೂ ಇಲ್ಲ | ಬಂತು ಹೊಸ ಕಾಯ್ದೆ PTCL Act Amendment
ಹೊಸ ನಿಯಮಗಳೇನು?
- ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ನಿಗದಿಪಡಿಸಿರುವ ಪಡಿತರ ಚೀಟಿಗಿಂತ ಹೆಚ್ಚುವರಿ ಕಾರ್ಡ್ ಮಂಜೂರು ಮಾಡಬಾರದು. ಕಳೆದ ಮೂರು ತಿಂಗಳುಗಳಿAದ ಆಹಾರಧಾನ್ಯ ಪಡೆಯದ ಕುಟುಂಬಗಳ ಕಾರ್ಡ್ ರದ್ದು ಮಾಡಬೇಕು.
- ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅವೆಲ್ಲ ಕಾರ್ಡ್ ರದ್ದು ಮಾಡಿದ ಬಳಿಕ ರದ್ದಾದ ಕಾರ್ಡ್’ಗೆ ಅನುಗುಣವಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಕಾರ್ಡ್’ಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡಬೇಕು.
ನಿಗದಿ ಮೀರಿದ ರೇಷನ್ ಕಾರ್ಡ್
ಒಂದು ರಾಜ್ಯದ ಜನನಸಂಖ್ಯೆಗೆ ಅನುಗುಣವಾಗಿ ಇಂತಿಷ್ಟೇ ಪಡಿತರ ಚೀಟಿ ವಿತರಿಸಬೇಕು ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National Food Security Act-NFSA) ಹೇಳುತ್ತದೆ. ಆದರೆ, ರಾಜ್ಯದಲ್ಲಿ ಈಗಾಗಲೇ ನಿಗದಿಗಿಂತ ಹಲವು ಪಟ್ಟು ಹೆಚ್ಚು ಪಡಿತರ ಚೀಟಿಗಳನ್ನು ನೀಡಲಾಗಿದೆ.
ಸದ್ಯ ಕರ್ನಾಟಕದಲ್ಲಿ 3,92,54,052 ಕುಟುಂಬಗಳಿಗೆ 1,16,98,551 ಪಡಿತರ ಚೀಟಿ ನೀಡಲಾಗಿದೆ. ಅಂದರೆ, 13,27,882 ಬಿಪಿಎಲ್ ಕಾರ್ಡ್’ಗಳನ್ನು ನಿಗದಿಗಿಂತ ಹೆಚ್ಚುವರಿಯಾಗಿ ನೀಡಲಾಗಿದೆ. ಇದು ಸರಕಾರಕ್ಕೆ ನೂರಾರು ಕೋಟಿ ರೂಪಾಯಿ ಹೊರೆಯಾಗುತ್ತಿದೆ.
2.5 ಲಕ್ಷ ಅರ್ಜಿ ಬಾಕಿ
ಈಗಾಗಲೇ ಹೊಸ ರೇಷನ್ ಕಾರ್ಡ್’ಗಾಗಿ 2,95,986 ಅರ್ಜಿಗಳು ಸಲ್ಲಿಕೆಯಾಗಿದ್ದು; ಇವುಗಳಲ್ಲಿ ಕೇವಲ 58,561 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ಇನ್ನು ಸುಮಾರು 2.38 ಲಕ್ಷ ಅರ್ಜಿಗಳು ವಿಲೇವಾರಿಗಾಗಿ ಕಾಯುತ್ತಿವೆ. ಇವುಗಳ ವಿಲೇವಾರಿ ನಂತರ ಹೊಸ ಅರ್ಜಿ ಅವಕಾಶ ನೀಡುವುದಾಗಿ ಸರಕಾರ ಹೇಳುತ್ತಿದೆ.
ಈಚೇಗೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಬಳಿಕ ರೇಷನ್ ಕಾರ್ಡ್ ಬೇಡಿಕೆ ಹಠಾತ್ ಹೆಚ್ಚಾಗಿದೆ. ಜೊತೆಗೆ ಆರೋಗ್ಯ ಸಂಬAಧಿ ಸಮಸ್ಯೆಯುಳ್ಳವರಿಗೂ ಕಾರ್ಡ್ ಅನಿವಾರ್ಯವಾಗಿದೆ. ಆರೋಗ್ಯ ಸಂಬAಧಿ ಕಾರಣಕ್ಕೆ ರೇಷನ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಸಮಸ್ಯೆ ಇರುವವರು ಸೂಕ್ತ ದಾಖಲೆ ನೀಡಿ ಕಾರ್ಡ್ ಪಡೆಯಬಹುದಾಗಿದೆ.