Krishi Central App : ‘ಕೃಷಿ ಸೆಂಟ್ರಲ್’ ಒಂದು ನೂತನ ಡಿಜಿಟಲ್ ಮಾರುಕಟ್ಟೆ, ತಂತ್ರಜ್ಞಾನದ ಮೂಲಕ ರೈತರಿಗೆ ಸ್ಥಳೀಯ ವಹಿವಾಟುಗಳನ್ನು ಸರಳಗೊಳಿಸುವುದು, ಖರೀದಿದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು, ಲಾಭದಾಯಕತೆಯನ್ನು ಹೆಚ್ಚಿಸಲು ಮತ್ತು ಅವರ ಉತ್ಪನ್ನಗಳಿಗೆ ವ್ಯಾಪಕ ಪ್ರವೇಶವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ.
ಇದೊಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು; ಇದರಲ್ಲಿ ಡ್ರೋನ್ ಸೇವೆಗಳು, ಸೋಲಾರ್ ಸೇವೆಗಳು, ಬೋರ್ವೆಲ್ ಸೇವೆಗಳು, ಪಶು ವೈದ್ಯರು, ತೆಂಗಿನ ಕಾಯಿ ಕೀಳುವವರು, ಅಡಿಕೆ ಕೀಳುವವರು ಹೀಗೆ ಮುಂತಾದ ಸೇವೆಗಳು ಈಗಾಗಲೇ ಲಭ್ಯ ಇವೆ.
Krishi Central App ಇನ್ಸ್ಟಾಲ್ ಮಾಡಿ
ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಅಗ್ನಿಶಾಮಕ ಇಲಾಖೆಯಲ್ಲಿ 975 ಹುದ್ದೆಗಳಿಗೆ ಅರ್ಜಿ | ಶೀಘ್ರದಲ್ಲೇ ನೇಮಕಾತಿ KSFES Recruitment 2024
ಸಾಮಾನ್ಯ ಕುಂದು ಕೊರತೆಗಳು
ಇಂದಿನ ದಿನದಲ್ಲಿ ಕೃಷಿ ಸಂಬ೦ಧಿಸಿದ ವಹಿವಾಟಿನಲ್ಲಿ ತುಂಬಾ ಕಾಲ ಹರಣವಾಗುತ್ತಿದೆ ಹಾಗೂ ಕೃಷಿ ಉತ್ಪನ್ನಗಳಿಗೆ ತಕ್ಕ ಬೆಲೆ ಸಿಗುತ್ತಿಲ್ಲ. ‘ಕೃಷಿ ಸೆಂಟ್ರಲ್’ ಆ್ಯಪ್ (Krishi Central App) ಕೃಷಿ ವ್ಯವಹಾರಗಳಿಗೆ ಸಮಯ ಮತ್ತು ಹಣವನ್ನು ಉಳಿಸಲು ಸಮರ್ಪಿಸಲಾಗಿದೆ. ಯಾರಿಗಾದರೂ ಸಗಣಿ ಗೊಬ್ಬರ, ಭತ್ತದ ಹುಲ್ಲು, ಕೃಷಿ ಕಾರ್ಮಿಕರು, ಯಂತ್ರೋಪಕರಣ ಕುರಿತ ಮಾಹಿತಿ ಇಲ್ಲಿ ಸಿಗುತ್ತದೆ.
ಕೃಷಿ ಸಂಬ೦ಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಚಿಸುವವರು ತಮ್ಮ ಬಳಿ ಎಷ್ಟು ಟ್ರಿಪ್ ಕೊಟ್ಟಿಗೆ ಗೊಬ್ಬರವಿದೆ? ಎಷ್ಟು ಲೋಡ್ ಭತ್ತದ ಹುಲ್ಲಿದೆ? ಪ್ರತಿ ಟ್ರಿಪ್ಪಿಗೆ ಎಷ್ಟು ಹಣ? ಎಂಬ ಮಾಹಿತಿ ‘ಕೃಷಿ ಸೆಂಟ್ರಲ್’ ಆ್ಯಪ್’ನಲ್ಲಿ ನೀಡುತ್ತಾರೆ. ಯಾವ ರೈತರಿಗೆ ಇದರ ಅಗತ್ಯವಿದೆಯೋ, ಅವರು ಮಾರಲಿಕ್ಕೆ ಹಾಕಿರುವ ರೈತರನ್ನು ನೇರವಾಗಿ ಸಂಪರ್ಕಿಸಿ ಸುಲಭ ವಹಿವಾಟು ನಡೆಸಬಹುದು.
ಇದನ್ನೂ ಓದಿ: ಕೃಷಿ ಪಂಪ್ಸೆಟ್ಗೆ ಸೋಲಾರ್ ವಿದ್ಯುತ್: ರೈತರಿಂದ ಅರ್ಜಿ ಆಹ್ವಾನ Solar Agricultural Pump Set Scheme
ರೈತರಿಗಾಗುವ ಲಾಭಗಳು
ನೇರ ಮಾರಾಟ ಮತ್ತು ಹೆಚ್ಚುವರಿ ಲಾಭ: ರೈತರು ತಮ್ಮ ಉತ್ಪನ್ನಗಳನ್ನು ಮತ್ತು ಉಪ ಉತ್ಪನ್ನಗಳನ್ನು ನೇರವಾಗಿ ಇಲ್ಲಿ ಮಾರಾಟಕ್ಕೆ ಹಾಕುವ ಮೂಲಕ ಮಧ್ಯವರ್ತಿಗಳನ್ನು ಬೈಪಾಸ್ ಮಾಡಿ, ಉತ್ತಮ ಬೆಲೆ ಮತ್ತು ಹೆಚ್ಚುವರಿ ಲಾಭ ಪಡೆಯಬಹುದು.
ಆಧುನಿಕ ತಂತ್ರಜ್ಞಾನದ ಸುಲಭತೆ: ರೈತರು ಅಪ್ಲಿಕೇಶನ್ ಮೂಲಕ ಆಧುನಿಕ ಕೃಷಿ ಯಂತ್ರಗಳನ್ನು ಸುಲಭವಾಗಿ ಬಾಡಿಗೆಗೆ ಪಡೆಯಬಹುದು ಅಥವಾ ಖರೀದಿಸಬಹುದು.
ಸಮಗ್ರ ನಿರ್ವಹಣಾ ಸಾಧನಗಳು: ಬೆಳೆಗಳು, ಯಂತ್ರೋಪಕರಣಗಳು ಮತ್ತು ಪ್ರಾಣಿಗಳಿಗೆ ಸಂಬ೦ಧಿಸಿದ ನಿಮ್ಮ ಖರ್ಚುಗಳನ್ನು ನಮ್ಮ ವೆಚ್ಚ ನಿರ್ವಹಣಾ ಸಾಧನದೊಂದಿಗೆ ಪ್ರತ್ಯೇಕವಾಗಿ ಟ್ರ್ಯಾಕ್ ಮಾಡಿ, ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಇನ್ಮುಂದೆ ಈ ರೈತರ ಭೂಮಿ ಮಾರುವಂತಿಲ್ಲ, ಯಾರೂ ಖರೀದಿಸುವಂತೆಯೂ ಇಲ್ಲ | ಬಂತು ಹೊಸ ಕಾಯ್ದೆ PTCL Act Amendment
ಮಾಹಿತಿ ಕೇಂದ್ರ: ಕೃಷಿ ಸಂಬ೦ಧಿತ ಸುದ್ದಿ, ಲೇಖನಗಳು, ಸೂಚನಾ ವೀಡಿಯೊಗಳು ಮತ್ತು ಕೃಷಿ ವಿಷಯಗಳ ಕುರಿತು ತಜ್ಞರ ಸಲಹೆಗಳನ್ನು, ಜ್ಞಾನವನ್ನು ಪಡೆಯಲು ಮತ್ತು ಕೃಷಿ ಪದ್ಧತಿಗಳನ್ನು ಅತ್ಯುತ್ತಮವಾಗಿಸಲು ಸಮುದಾಯಕ್ಕೆ ಸಹಾಯ ಮಾಡಲು ಎಲ್ಲವನ್ನೂ ಸಂಗ್ರಹಿಸಲಾಗಿದೆ.
ಸಮುದಾಯ ವೇದಿಕೆ: ಇತರ ರೈತರೊಂದಿಗೆ ಸಂಪರ್ಕ ಸಾಧಿಸಿ, ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಕೃಷಿ ಸಂಬ೦ಧಿತ ಸಮಸ್ಯೆಗಳನ್ನು ಚರ್ಚಿಸಿ, ನೀವು ಸಲಹೆಯನ್ನು ಪಡೆಯಬಹುದು ಅಥವಾ ಇತರೆ ರೈತರಿಗೆ ಸಲಹೆಯನ್ನು ನೀಡಬಹುದು.
ವ್ಯಾಪಾರಿಗಳಿಗೆ ಆಗುವ ಲಾಭಗಳು
ನೇರ ಸಂಪರ್ಕ: ರೈತರು ತಾವು ಬೆಳೆದ ಉತ್ಪನ್ನಗಳನ್ನು ಇಲ್ಲಿ ಮಾರಾಟಕ್ಕೆ ಹಾಕುತ್ತಾರೆ. ಬೇಕಾದ ವ್ಯಾಪಾರಿಗಳು ರೈತರನ್ನು ನೇರವಾಗಿ ಸಂಪರ್ಕ ಮಾಡಿ ವಹಿವಾಟನ್ನು ಪ್ರಾರಂಭಿಸಬಹುದು.
ಮಾರಾಟಗಾರರ ಗೋಚರತೆ: ನಿರ್ದಿಷ್ಟ ಗ್ರಾಮ ಅಥವಾ ತಾಲ್ಲೂಕಿನಲ್ಲಿ, ನಿರ್ದಿಷ್ಟ ಬೆಳೆ ಮಾರಾಟಗಾರರ ಪಟ್ಟಿಯನ್ನು ಕಂಡು ಹಿಡಿಯಬಹುದು ಮತ್ತು ಅವರನ್ನು ಸಂಪರ್ಕಿಸಬಹುದು.
ಕೃಷಿ ಸೇವಾ ಪೂರೈಕೆದಾರರಿಗೆ ಆಗುವ ಲಾಭಗಳು
ವಿಶಾಲ ಮಾರುಕಟ್ಟೆ ಪ್ರವೇಶ: ವ್ಯಾಪಾರಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಈ ಆ್ಯಪ್’ನಲ್ಲಿ ಪಟ್ಟಿ ಮಾಡುವ ಮೂಲಕ ಸ್ಥಳೀಯ ಗಡಿಗಳನ್ನು ಮೀರಿ ಹೆಚ್ಚು ಗ್ರಾಹಕರನ್ನು ತಲುಪಿಬಹುದು.
ಜಾಹೀರಾತು ವೇದಿಕೆ: ಒಂದೇ ಸ್ಥಳದಲ್ಲಿ ವಿವಿಧ ಸ್ಥಳಗಳಿಂದ ಅಪಾರ ಸಂಖ್ಯೆಯ ರೈತರನ್ನು ತಲುಪಿ ಮತ್ತು ಮಾರ್ಕೆಟಿಂಗ್ ವೀಡಿಯೊಗಳು ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅವರಿಗೆ ಪ್ರದರ್ಶಿಸಿ.
ಕೃಷಿ ಸೆಂಟ್ರಲ್ ಆ್ಯಪ್ ಬಳಸುವುದು ಹೇಗೆ?
ಈಗಾಗಲೇ ಹೆಚ್ಚಿನ ರೈತರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಕೃಷಿ ವ್ಯವಹಾರಗಳನ್ನು ಡಿಜಿಟಲೀಕರಿಸಿ ಮತ್ತು ಕೃಷಿ ಸೆಂಟ್ರಲ್ ಬಳಸಿ ಹೆಚ್ಚು ಲಾಭ ಪಡೆಯಿರಿ. ಈಗಲೇ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಕೃಷಿ ಜೀವನವನ್ನು ಸುಲಭವಾಗಿಸಿ.
Krishi Central App ಇನ್ಸ್ಟಾಲ್ ಮಾಡಿ