Drought Relief Farmers Account : ಈಚೆಗೆ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಸಂಪೂರ್ಣ ಫಲಾನುಭವಿ ರೈತರ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಾಗುತ್ತಿದೆ.
48.19 ಲಕ್ಷ ಹೆಕ್ಟೇರ್ನಲ್ಲಿ ನಷ್ಟ
ಕರ್ನಾಟಕದಲ್ಲಿ ಒಟ್ಟು 223 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲ್ಪಟ್ಟಿದ್ದು; ಇದರಲ್ಲಿ 196 ತಾಲ್ಲೂಕುಗಳು ತೀವ್ರ ಬರ ಎದುರಿಸುತ್ತಿವೆ. ಒಟ್ಟಾರೆ ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ.
ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಿನ ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ (ಎನ್ಡಿಆರ್ಎಫ್) ಶೀಘ್ರವೇ 18,177.44 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.
ಸಂಪೂರ್ಣ ಹಣ ರೈತರ ಖಾತೆಗೆ ಜಮಾ
ರಾಜ್ಯ ಸರ್ಕಾರ ಒಟ್ಟು 18,172 ಕೋಟಿ ರೂಪಾಯಿ ಪರಿಹಾರ ಕೇಳಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ರೂಪಾಯಿ ಮಾತ್ರ ಪರಿಹಾರ ವಿತರಣೆ ಮಾಡಿದೆ. ಅಂದರೆ, ಕೇಳಿದ್ದರಲ್ಲಿ ಶೇ.19ರಷ್ಟು ಹಣವನ್ನು ಮಾತ್ರ ಕೊಟ್ಟಿದೆ.
ರಾಜ್ಯ ಸರಕಾರವು ಈಗಾಗಲೇ ಒಟ್ಟು 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನ ಬರ ಪರಿಹಾರವನ್ನು ನೀಡಿದೆ. ಈಗ ಕೇಂದ್ರದಿAದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಹಾಕಲಾಗುತ್ತಿದೆ.
ಈಗ ಕೇಂದ್ರದಿ೦ದ ಬಂದಿರುವ ಸಂಪೂರ್ಣ ಹಣವನ್ನು ರೈತರಿಗೆ ಕೊಡಲಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇದಾವುದಕ್ಕೂ ಇದರಲ್ಲಿ ರಾಜ್ಯ ಸರಕರ ಬಳಸಿಕೊಂಡಿಲ್ಲ ಎನ್ನಲಾಗುತ್ತಿದೆ.
![](https://raitapijagattu.com/eekudokr/2024/06/1-DroughtReliefFarmersAccount.jpg)
ಯಾವ ರೈತರಿಗೆ ಎಷ್ಟು ಪರಿಹಾರ?
ಗರಿಷ್ಠ ಎರಡು ಹೆಕ್ಟೇರ್ ಅಂದರೆ ತಲಾ ಐದು ಎಕರೆಗೆ ಮಾತ್ರ ಬರ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಒಂದೊ೦ದು ರೀತಿಯ ಪರಿಹಾರ ಮೊತ್ತ ನಿಗದಿ ಮಾಡಲಾಗಿದ್ದು; ಹೆಕ್ಟೇರ್ವಾರು ಮೊತ್ತದ ವಿವರ ಈ ಕೆಳಗಿನಂತಿದೆ:
- ಮಳೆಯಾಶ್ರಿತ ಬೆಳೆ: ಹೆಕ್ಟೇರ್ಗೆ 8,500 ರೂಪಾಯಿಯಂತೆ ಎರಡು ಹೆಕ್ಟೇರ್ಗೆ 17,000 ರೂಪಾಯಿ
- ನೀರಾವರಿ ಬೆಳೆ: ಹೆಕ್ಟೇರ್ಗೆ 17,000 ರೂಪಾಯಿಯಂತೆ ಎರಡು ಹೆಕ್ಟೇರ್ಗೆ 34,000 ರೂಪಾಯಿ
- ಬಹುವಾರ್ಷಿಕ ಬೆಳೆ : ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 22,500 ರೂಪಾಯಿಯಂತೆ ಎರಡು ಹೆಕ್ಟೇರ್ಗೆ 45,000 ರೂಪಾಯಿ
ನಿಮ್ಮ ಪರಿಹಾರ ಹಣ ಚೆಕ್ ಮಾಡಿ
ಈಗಾಗಲೇ ಬಹುತೇಕ ರೈತರಿಗೆ ಬರ ಪರಿಹಾರ ಹಣ ಜಮಾ ಆದ ಬಗ್ಗೆ ರೈತರು ಹೊಂದಿರುವ ಬ್ಯಾಂಕ್ನಿ೦ದ ನೇರವಾಗಿ ಮೊಬೈಲ್ ಎಸ್ಎಂಎಸ್ ಬಂದಿರುತ್ತದೆ. ಒಂದು ವೇಳೆ ಎಸ್ಎಂಎಸ್ ಬಾರದೇ ಇದ್ದರೆ ರಾಜ್ಯ ಸರಕಾರದ ‘ಪರಿಹಾರ ಹಣ ಸಂದಾಯ ವರದಿ’ ತಂತ್ರಾ೦ಶದ ಮೂಲಕ ಫಲಾನುಭವಿ ರೈತರು ತಮಗೆ ಸಂದಾಯವಾಗಿರುವ ಪರಿಹಾರ ಹಣದ ವಿವರ ತಿಳಿಯಬಹುದಾಗಿದೆ.
ನಾವು ಕೆಳಗೆ ನೀಡಿರುವ ‘ಪರಿಹಾರ ಹಣ ಸಂದಾಯ ವರದಿ’ ತಂತ್ರಾ೦ಶದ ಲಿಂಕ್ ಬಳಸಿ ರೈತರು ತಮ್ಮ ಆಧಾರ್ ನಂಬರ್ ನಮೂದಿಸಿ, ವರ್ಷ, ಋತು ಸೆಲೆಕ್ಟ್ ಮಾಡಿ ಕ್ಯಾಪ್ಚಾ ನಮೂದು ಮಾಡಿ ಸಬ್ಮಿಟ್ ಒತ್ತಿದರೆ ನಿಮಗೆ ಹಣ ಜಮಾ ವಿವರ ತಿಳಿಯಲಿದೆ.
ಬರ ಪರಿಹಾರ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಇನ್ನೊಂದು ವಿಧದಲ್ಲಿ ನಾವು ಕೆಳಗೆ ನೀಡಿರುವ DBT Karnataka ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಆಧಾರಿತ ಒಟಿಪಿ ಮೂಲಕ ಸ್ವವಿವರ ನಮೂದಿಸಿ ಬರ ಪರಿಗಾರ ಜಮಾ ವಿವರವನ್ನು ಪರಿಶೀಲಿಸಬಹುದಾಗಿದೆ.
DBT Karnataka Link : Download